01 January 2022

ಹೊಸ ವರ್ಷದ ಸಂಕಲ್ಪಗಳು


 



ಹೊಸ ವರ್ಷದ ಸಂಕಲ್ಪ


ಪ್ರತಿ ದಿನ ಪ್ರತಿ ಕ್ಷಣವನ್ನು ಸ್ಮರಣಾರ್ಹವಾಗಿಸಲು ನಾನು ಪ್ರಯತ್ನ ಪಡುತ್ತಿರುವೆ ಆದರೆ ಕೆಲವೊಮ್ಮೆ ನೋವು ದುಃಖಗಳು ನಮ್ಮನ್ನು ಕಾಡುತ್ತವೆ. 2021 ರಲ್ಲಿ ಸ್ಮರಣಾರ್ಹ ಕೆಲದಿನಗಳ ಪಟ್ಟಿ ಮಾಡುವುದಾದರೆ 


೧ ನನ್ನ "ಸಿಹಿಜೀವಿಯ ಗಜಲ್ ಪುಸ್ತಕ " ಲೋಕಾರ್ಪಣೆ ಆದ ದಿನ 

೨ ನನ್ನ " ವಿದ್ಯಾರ್ಥಿಗಳಿಗೆ ಪ್ರಬಂಧಗಳು " ಪುಸ್ತಕ ಬಿಡುಗಡೆಯಾದ ದಿನ

೩ ನೇಶನ್ ಬಿಲ್ಡರ್ ಅವರ್ಡ್ ಪಡೆದ ದಿನ

೪ ಮೂರು ವರ್ಷಗಳ ನಂತರ ಧರ್ಮಸ್ಥಳ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿದ ದಿನ

೫ ನಮ್ಮ ತೋಟದಲ್ಲಿ ಕಳೆದ ದಿನಗಳು 

೬ ನನ್ನ ಶಾಲಾ ಮಕ್ಕಳಿಗೆ ಪಾಠ ಮಾಡಿದ ಪ್ರತಿದಿನ

೭ ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ ಪ್ರತಿ ಕ್ಷಣ.


2022 ರ ನನ್ನ ಸಂಕಲ್ಪಗಳು


೧ ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು

೨ ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.

೩ ಕನಿಷ್ಟ ಪಕ್ಷ ೨೫ ಕ್ಕೂ ಹೆಚ್ಚು ಪುಸ್ತಕಗಳನ್ನು ಓದುವುದು.

೪.  ಐತಿಹಾಸಿಕ ಸ್ಥಳಗಳಿಗೆ  ಪ್ರವಾಸ ಮಾಡುವುದು .



ಸಿಹಿಜೀವಿ. 

ಸಿ ಜಿ ವೆಂಕಟೇಶ್ವರ



No comments: