19 July 2021

ಮದ್ದು ಬರುವುದು.ಕವನ


 



ಮದ್ದು ಬರುವುದು


ಜಗವನ್ನೇ ನಲುಗಿಸಿದ

ಜೀವಕೋಟಿಗಳ 

ಹೈರಾಣಾಗಿಸಿದ 

ವೈರಾಣುವಿನ ವಿರುದ್ಧ

ಮದ್ದು ಬಂದಿದೆ.


ಅತಿಯಾಸೆಯೆಂಬ

ಮಹಾವ್ಯಾಧಿಗೆ ಯತಿಗಳು

ಚಿಂತಕರು, ಸಂತರು, 

ಬುದ್ದಿವಂತರು ಮದ್ದು

ನೀಡಲು ಪ್ರಯತ್ನಿಸಿದರು

ವ್ಯಾದಿ  ಗುಣಮುಖವಾಗಿಲ್ಲ ಉಲ್ಬಣವಾಗುತ್ತಲೇ ಇದೆ.


ಆ ಮದ್ದನು ಕಂಡುಹಿಡಿಯಲು

ನನಗೆ ,ನಿನಗೆ ಸಾದ್ಯವಾಗಿಲ್ಲ

ಬ್ರಹ್ಮಾಂಡದಲ್ಲೆಲ್ಲೋ

ಅಡಗಿದೆ ಅವನು 

ಇಂದಲ್ಲ ನಾಳೆ ತರುವನು

ಎಂಬ ಸದಾಶಯವಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: