14 July 2021

ಭಗವಂತನ ಸೇರೋಣ. ಲೇಖನ


 


ಭಗವಂತನ ಸೇರೋಣ ಕಿರುಲೇಖನ


ಭಗವಂತ ಸರ್ವಾಂತರ್ಯಾಮಿ, ನಿರಾಕಾರ,‌ನಿರ್ಗುಣ, ಸರ್ವಶಕ್ತ ಎಂಬುದು ನಮಗೆ ತಿಳಿದ ವಿಚಾರವೇ ಆಗಿದೆ.

 ಭಗವಂತನ ಇರುವಿಕೆ ,ಒಲಿಸಿಕೊಳ್ಳುವಿಕೆ , ಪೂಜಿಸುವಿಕೆಯ ವಿಚಾರದಲ್ಲಿ ಅನಾದಿ ಕಾಲದಿಂದಲೂ ಹಲವಾರು ಚರ್ಚೆಗಳು ನಡೆದಿದ್ದರೂ ಇದಮಿತ್ತಂ ಎಂಬ ತೀರ್ಮಾನಕ್ಕೆ ಬರಲಾಗಿಲ್ಲ,  ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಹೀಗೆ ವಿವಿಧ ಸಿದ್ದಾಂತಗಳು ಮಂಡನೆಯಾದರೂ ಯಾವುದೂ ಸರ್ವ ಸಮ್ಮತವಾದ ಸಿದ್ದಾಂತಗಳಲ್ಲ 


ಭಗವಂತನ ಆರಾಧನೆಗೆ ಮೊದಲು ಮೂರ್ತ ಸ್ವರೂಪದ ಆರಾಧನೆ ಮಾಡುವುದು ಒಳಿತು ,ಕ್ರಮೇಣ ನಮ್ಮ ಸಾಧನೆ , ಧ್ಯಾನ ,ಪ್ರಾರ್ಥನೆ, ಅನುಸಂಧಾನ , ಮುಂತಾದವುಗಳ ಆಧಾರದ ಮೇಲೆ ಅಮೂರ್ತವಾದ ಆರಾಧನೆ ಗೆ ಮುಂದಾಗಬಹುದು ಕೊನೆಗೆ ಅಹಂ ಬ್ರಹ್ಮಾಸ್ಮಿ ಎಂಬ ಸ್ತಿತಿಗೆ ತಲುಪಿ ಆತ್ಮ ಸಾಕ್ಷಾತ್ಕಾರ ಪಡೆಯಬಹುದು.


ಮೂರ್ತ ಅಮೂರ್ತಗಳ

ಗೊಡವೆಯಿಲ್ಲದೆ 

ಆರಾಧಿಸುವ ನಾವು

ಸರ್ವ ಶಕ್ತನ|

ಭಕ್ತಿಯ ಏಣಿಯ 

ಒಂದೊಂದೇ ಕಾಲನ್ನು

ಹತ್ತಿ ಸೇರೋಣ

ಭಗವಂತನ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: