02 April 2021

ನಾನು ಮಾನವ (ಕವನ)


 


*ನಾನು ಮಾನವ*


ಜಗವೇ ನನ್ನ ಕಾಲ ಕೆಳಗಿರಬೇಕು

ಎಲ್ಲರೂ ನನ್ನ ಅಡಿಯಾಳಾಗಿರಬೇಕು

ಜಗದೆಲ್ಲಾ ಸುಖ‌ ನನಗೇ ದಕ್ಕಬೇಕು 

ನನ್ನ ಸಂತತಿಗೆ ಎಲ್ಲಾ ಸೇರಬೇಕು.


ಯಾರಾದರೂ ಮೇಲೇರಿದರೆ

ಅವರನ್ನು ಕೆಳಗೆಳೆಯದೇ ಬಿಡೆನು

ಮತ್ಸರ ನನ್ನ ರಕ್ತಗತವಾಗಿದೆ

ನನ್ನ ಕೆಣಕಿದರೆ ಮಾಡುವೆ ಹತ.


ಈ ಭುವಿಯೂ ನನದೇ 

ಇತರೆ ಜೀವಿಗಳು ನಾನಾದ ಮೇಲೆ

ನೀರು ,ಗಾಳಿ ಕಾಡು ನನ್ನ ಸ್ವಂತ

ನಾನೇ ಸ್ವಘೋಷಿತ ಭಗವಂತ


ನಾನಳಿದರೂ ನನಗಿಲ್ಲ ಚಿಂತೆ

'ನಾನು' ಎಂದಿಗೂ ಹೋಗುವುದಿಲ್ಲ

ಏಕೆಂದರೆ "ನಾನು" ಮಾನವ 

ನರರೂಪದ ದಾನವ !


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


No comments: