03 June 2020

ಸಿಹಿಜೀವಿಯ ಮೂವತ್ತು ಹಾಯ್ಕುಗಳು

ಸಿಹಿಜೀವಿಯ ಮೂವತ್ತು ಹಾಯ್ಕುಗಳು



*ತಮ*

ಮಹಾ ಗೌತಮ
ಆದರ್ಶವಾಗಿದ್ದರೆ
ಎಲ್ಲಿದೆ ತಮ.



*ಸುಜ್ಞಾನ*

ಚರ್ಚೆ ಮಾಡಲು
ವಿಚಾರಗಳು ಬಂದು
ಸುಜ್ಞಾನ ಸಿರಿ.



*ಜೋಡಿ*

ವಾಗ್ವಾದ ಮಾಡು
ಅಹಂಕಾರ ಜೊತೆಗೆ
ಅಜ್ಞಾನ ಜೋಡಿ



*ಕರುಣಾಮೂರ್ತಿ*

ಕರುಣಾಮೂರ್ತಿ
ಸಹನೆಯ ಕಡಲು
ನಮ್ಮಯ ತಾಯಿ.



*ಮಾತೆ*

ದೇವರು ಇಲ್ಲಿ
ಕಣ್ಣಿಗೆ ಕಾಣುವಳು
ಅವಳೇ ಮಾತೆ .




ಕವಿತೆಗಳು
ಹೃದಯದ ಆಳದ
ಭಾವನೆಗಳು



ಮಳೆಯಾಗಿದೆ
ಒಳಿತಿಗಿಂತ ಹೆಚ್ಚು
ಕೊಚ್ಚಿಹೋಗಿದೆ


ಬಡಿದಾಡುವೆ
ಇಲ್ಲಿರುವೆ ಕೇವಲ
ಮೂರುದಿವಸ



ನಾನೆನ್ನದಿರು
ಹಮ್ಮಿನಲಿ‌ ಏನಿದೆ?
ನಾವೆಂದುನೋಡು

೧೦
ಮೊದಲಿದ್ದವು
ಕಡಲಿನಾಳದಲಿ
ಕೆನ್ನೆಸೇರಿವೆ



೧೧
ಕೀರುತಿಗೊಬ್ಬ
ಬೇಕೆಂದು ಕೊರಗುವೆ
ಆರತಿಗೊಬ್ಬಳು?

೧೨

ಕ್ರಾಂತಿಯ ಕಿಡಿ
ಈಗಲೂ ಹರಿದಿದೆ
ವೀರಸಾವರ್ಕರ್

೧೩

ಉರಿಯಲಾಸೆ
ಇಂಧನ ತರಬೇಕು
ಅವನಿಗೀಗ


೧೪

ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.

೧೫.

ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .

೧೬

ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.

೧೭


ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.


೧೮

ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?

೧೯

ಮೊದಲು ಮಿಂಚು
ಅನಂತರ ಗುಡುಗು
ಮಳೆಯೋ ಮಳೆ

೨೦

ಮಕ್ಕಳಿಗಲ್ಲ
ಎಲ್ಲರಿಗೂ ಪರೀಕ್ಷೆ
ಪಾಸಾಗೋಣವೆ?

೨೧

ಹೊಸ ಸೇರ್ಪಡೆ
ಚಳಿ ಮಳೆ ಬೇಸಗೆ
ಕರೋನ ಕಾಲ


೨೨

ರೂಪದರ್ಶಿಗೆ
ಸಾವಿರದ ಶರಣು
ಅಭಿನಂದನೆ.

೨೩

ಪ್ರೇಮಲೋಕದ
ಹಠವಾದಿ ನಾಯಕ
ಕನಸುಗಾರ

೨೪

ರವಿ ಚಂದಿರ
ಒಂದೆಡೆಯೆ ಇದ್ದರೆ
ರವಿಚಂದ್ರನ್


೨೫


ಚಿತ್ರಗಳಲ್ಲಿ
ಹಂಸ ರವಿಯ ಮಿಲನ
ಸಂಗೀತೋತ್ಸವ



೨೬

ಚಂಡಮಾರುತ
"ನಿಸರ್ಗದ ಮುನಿಸು"
ರೌದ್ರಾವತಾರ.


೨೭

ಮಾರುತ ಮಳೆ
ಜೋಡಿ ಅನಾಹುತ
ಚಂಡಮಾರುತ

೨೮

ತೂಕ ಇಳಿಸು
ದಢೂತಿ ದೇಹವೇಕೆ?
ಸೈಕಲ್ ಹೊಡಿ

೨೯

ಸೈಕಲ್ ತುಳಿ
ಶ್ವಾಸಕೋಶಕ್ಕೆ ಬಲ
ಸ್ವಾಸ್ಥ್ಯ ಜೀವನ

೩೦

ಮಾಲಿನ್ಯವಿಲ್ಲ
ಇಂಧನವು ಬೇಕಿಲ್ಲ
ಸೈಕಲ್ ಸರಿ



ಸಿ‌ ಜಿ ವೆಂಕಟೇಶ್ವರ
ತುಮಕೂರು


No comments: