29 December 2018

ನಮನ ( ರಸ ಋಷಿಗೆ ನುಡಿ ನಮನ)

           

*ನಮನ*

ಜಗದ ಕವಿ ಯುಗದ ಕವಿ
ನಿಮಗೆ ನಮನ
ಜನಮಾನಸದಿ ನೆಲಸಿದ
ಅಕ್ಷರ ಮಾಂತ್ರಿಕರೆ
ನಿಮಗೆ ನಮನ

ಪ್ರಕೃತಿಯ ಆರಾಧಿಸಿ
ವಿಕೃತಿಯ ವಿರೋಧಿಸಿ
ಸಮಬಾಳು ಸಮಪಾಲು
ಬೋಧಿಸಿದ ರಸ ಋಷಿಯೆ
ನಿಮಗೆ ನಮನ

ನೇಗಿಲ ಯೋಗಿಗೆ ನಮಿಸಿ
ವಿವೇಕಾನಂದರ ಭಜಿಸಿ
ಕೊಳಲನಾದವ ಸುರಿಸಿ
ಪಕ್ಷಿಕಾಶಿಯ ತೋರಿದ
ರಾಷ್ಟ್ರ ಕವಿಯೇ ನಿಮಗೆ ನಮನ

ಮಲೆಗಳಲಿ ಮದುಮಗಳ ತೋರಿಸಿ
ರಾಮಯಣದ ದರ್ಶನ ಮಾಡಿಸಿದ
ಕನ್ನಡಮ್ಮನ ಹೆಮ್ಮೆಯ ಕುವರ
ನಿಮಗೆ ನಮನ

ಕವಿಯಾಗಿ ,ಗುರುವಾಗಿ,ಪರಿಸರ
ಪ್ರಿಯಯೋಗಿಯಾಗಿ
ದಕ್ಷ ಆಡಳಿತ ಗಾರನಾಗಿ
ಜ್ಞಾನ ಪೀಠವ ಏರಿದರೂ
ವಿಶ್ವಮಾನವ ಸಂದೇಶ ನೀಡಿದ
ಅನಿಕೇತನ ಶಕ್ತಿಯೇ
ನಿಮಗೆ ನಮನ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: