05 September 2018

ಅಂದು‌..ಇಂದು..ಮುಂದೆ (ಕವನ ಶಿಕ್ಷಕರ ದಿನಾಚರಣೆಯ ಶುಭಾಶಯಗಳು)



             *ಅಂದು‌ ಇಂದು‌ ಮುಂದೆ*

*ಅಂದು*

ಗುರು ಬ್ರಹ್ಹ ವಿಷ್ಣು ಮಹೇಶ್ವರ
ಗುರುಕುಲದಿ ಕಲಿಸುವ ದೈವಾಂಶ ಸಂಭೂತ
ಬರೀ ಕಲಿಕೆಯೊಂದನ್ನು ಮಾಡಲು
ಪಣತೊಟ್ಟ ಗುರುವರ್ಯ
ನೈತಿಕ, ಮೌಲಿಕ ಜೀವನ ಮಾನವೀಯತೆಯ ವಿಕಸನಕ್ಕೆ ಶಿಕ್ಷಣ
ಗುರು ಕೇಂದ್ರಿತ ಗುರಿಇದ್ದ ಶಿಕ್ಷಣ
ಮೌಲ್ಯ ಯುತ ಗುರು, ಕಲಿಕಾರ್ಥಿಗಳು
ಸಮಾಜ ಸದೃಢ


*ಇಂದು*

ಗುರುವೇನ್ ಮಹಾ ಎಂಬ
ಕಲಿಕಾರ್ಥಿಗಳು
ಊಟಬಡಿಸುವ ಕಾಯಕದಿಂದಿಡಿದು
ಜನ ದನ ಎಣಿಸುವ ಸಕಲ ಕಾರ್ಯ
ಮಾಡಿ ಸಮಯವಿದ್ದರೆ ಕಲಿಸಿ
ನಲಿಸುವ ಟೀಚರ್
ಅಂಕಗಳ ಹಿಂದೆ ಬಿದ್ದು‌ ಅಂಕೆ
ತಪ್ಪಿದ ಮೌಲ್ಯಗಳು
ತಪ್ಪಿದರೆ ತಿದ್ದಲು ಶಿಕ್ಷೆ ಕೊಡಲು
ಕಾನೂನು ಹೇಳುತಿದೆ ಶಿಕ್ಷಕರು ದುರುಗುಟ್ಡಿ‌
ನೋಡಿದರೂ ತಪ್ಪು
ತಿದ್ದುವರಾರು ದಾರಿ ತಪ್ಪಿದ
ಭಾವಿ ಭಾರತದ ಪ್ರಜೆಗಳ


*ಮುಂದೆ*

ಗುರುವೇನ್ ಬ್ರಹ್ಮ ಅಲ್ಲ
ನೆಟ್ ಗೂಗಲ್, ಯೂಟ್ಯೂಬ್
ಆರ್ಟಿಪಿಷಿಯಲ್  ಇಂಟಲಿಜೆನ್ಸ್ ಇದೆಯಲ್ಲ
ಯಂತ್ರಗಳಿಂದ ಕಲಿತು
ಯಾಂತ್ರಿಕ ಜೀವನ ನಡೆಸಿ
ಯಂತ್ರಗಳ ಗುಲಾಮರಾಗಿ
ನಾವು ಸುಸಂಸ್ಕೃತ, ಆಧುನಿಕ ಅಭಿವೃದ್ಧಿ ಹೊಂದಿದ ದೇಶದ ಸತ್ ಪ್ರಜೆಗಳೆಂದು
ಕೊಚ್ಚಿಕೊಳ್ಳುವೆವು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: