29 August 2018

ಕರುಣಾಮೂರ್ತಿ (ಸುಧಾ ಮೂರ್ತಿ ರವರು ದಸರಾ ಉದ್ಘಾಟನೆ ಆಹ್ವಾನ ನೀಡಿದಾಗ ಬರೆದ ಕವನ)

           *ಕರುಣಾಮೂರ್ತಿ*

ಸರಳತೆಯ ವಿಳಾಸವೇ ಇವರು
ವಿರಳಾತಿವಿರಳ ಇಂತಹವರು
ಸದಾ ಹಸನ್ಮುಖಿ ತಾಯಿ
ಹೊಗಳೋಣ ಇವರ ಬಾಯಿತುಂಬ‌

ಕೋಟ್ಯಾಧಿಪ ನಾರಾಯಣ ಸ್ಬಾಮಿಯ ಮಡದಿ
ಧನಮದದಿಂದ ದೂರವುಳಿದ ನಾರಿ
ಬಾಹ್ಯ ಶ್ರೀಮಂತಿಕೆಗಿಂತ  ಆಂತರಿಕ ಶ್ರೀಮಂತ ಮಾತೆ
ಸಾಲದು ಕೊಂಡಾಡಿದರೆ ಎಷ್ಟು ಸಾರಿ

ದಾನ ಧರ್ಮದಲಿ ಎತ್ತಿದ ಕೈ
ಕಷ್ಟದಲಿರುವರ ಕಂಡರೆ
ಸಂಕಟ ಪಡುವರು ಸಂಗಡ ಇರುವರು
ಸಾಹಿತ್ಯ ಸೇವೆ ಮಾಡುತಿಹರು

ಕಷ್ಟದಲ್ಲಿರುವವರ ಕಂಡು ಮರುಗಿ
ಪ್ರೀತಿಯ ಸುಧೆ ಸುರಿಸುವವರು
ನೊಂದವರ ಪಾಲಿನ ಕರುಣಾಮೂರ್ತಿ
ಸರಳ ದಸರೆ ಉದ್ಘಾಟಿಸುವರು
ಇವರೇ ನಮ್ಮ ಸುಧಾ ಮೂರ್ತಿರವರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



No comments: