20 ಆಗಸ್ಟ್ 2018

ಕರ್ಮ (ಕವನ) ಕವಿ ಸಾಹಿತಿಗಳ ಜೀವಾಳ ಗುಂಪಿನಲ್ಲಿ ನಡೆದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕವನ

     
                   *ಕರ್ಮ*

ಅಳಿಯದಿರಿ ನನ್ನ
ಇಳೆಯ ಮಕ್ಕಳೆ
ಅಳಿಸಲಿಲ್ಲ ನಾನು ನಿಮ್ಮನು
ಬಾಳಿಸಿದೆನು ಸರ್ವರನು

ಅಳುತಿರುವಿರಿ ಈಗ
ಕೇಳಲಿಲ್ಲ ನನ್ನ ಮೊರೆ ಅಂದು
ಅನಭವಿಸುತಲಿರುವಿರಿ ಇಂದು
ಮೌನವಾಗಿ ಸಹಿಸಿದೆ
ನಿಮ್ಮಗಳ ಹುಚ್ಟಾಟ
ಉಪದ್ರವ ಉಡಾಪೆಗಳ
ನಾ ಕ್ಷಮಾಯಾಧರಿತ್ರಿ ನಿಜ
ಎಲ್ಲಿಯವರೆಗೆ ಸಹನೆ
ಮಿತಿ ಇಲ್ಲವೆ ನನ್ನ ಸಹನೆಗೆ ?

ಅಂತರ್ ಜಲಕೆ ನೀನಿರಬೇಕು
ಬಾರೋ ಮಳೆರಾಯ ಎಂದು
ಗೋಗರೆದಿರಿ ನಾ ಬಂದರೆ
ತೊಲಗು ನೀನೆಂದು ಹೇಳುವಿರಿ
ಕೆರೆ ನದಿಗಳ ಆಕ್ರಮಿಸಿ
ಬೆಟ್ಟ ಗುಡ್ಡಗಳ ಕೊರೆದು
ಸಮುದ್ರದ ತಟಗಳಲಿ ಮನೆಕಟ್ಟಿ
ಪ್ರವಾಹಕ್ಕೆ ನೀನೆ ಕಾರಣ ಎನ್ನುವುದು ತರವೆ?

ಪ್ರಕೃತಿಯ ದೂರುವುದ ನಿಲ್ಲಿಸಿ ಮನುಜರೆ
ವಿಕೃತಿಯನ್ಮು ತೊಡೆದು ಹಾಕಿ
ಪರಿಸರವಿರುವುದು ನಿಮ್ಮ ಆಸೆ ತೀರಿಸಲು
ದುರಾಸೆಗಳನಲ್ಲ
ಈಗಲಾದರೂ ಎಚ್ಚರ ಗೊಂಡು
ಜಾಗೃತರಾಗಿ ಬದುಕಿ
ಬದುಕಲು ಬಿಡಿ
ಮಾಡಿರಿ ಒಳ್ಳೆಯ ಕರ್ಮ
ಇಲ್ಲದಿದ್ದರೆ ನಿಮ್ಮ ಕರ್ಮ!?

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ