19 August 2018

*ಗಜ಼ಲ್43*

               *ಗಜ಼ಲ್*

ಸೂರ್ಯ ಚಂದ್ರರು ನಮಗೆ ಬೆಳಕು ನೀಡಿ ತೋರುವರು ಸಮತೆ
ಭೂದೇವಿ ಜಲದೇವತೆ ವಾಯುದೇವ ತೋರುವರು ಮಮತೆ

ಪ್ರಕೃತಿಯ ಮೇಲೆ ಮಾನವನ ವಿಕೃತಿ ದಬ್ಬಾಳಿಕೆ ನಿರಂತರ
ಮಾಡಿದ್ದುಣ್ಣೋ ಮಹರಾಯ ಎಂದು ಜಲ ಗಾಳಿ ಭೂಮಿ ತೋರುತಿದೆ ರೌದ್ರತೆ

ತಿಳಿದು ತಿಳಿಯದೆ ಮಾಡಿದ ಅಪರಾಧಗಳು ನೂರಾರು ಸಾವಿರಾರು
ಅಳಿದ ಜನ ಜಾನುವಾರು ನೋಡಿ ಹೇಳುವರೀಗ ರೂಢಿಸಿಕೊಳ್ಳೊಣ ಸರಳತೆ

ವಿಕೋಪ ಕ್ಕೆ ಮೊದಲು‌ ಜಾತಿ ಮತದ ಜಂಜಾಟ ಈಗ ಅನ್ನ ನೀರಿಗೆ ಹಾಹಾಕಾರ
ಕರ್ಮಟ ಸಂಪ್ರದಾಯವಾದಿಯೂ ಕೈಯ್ಯೋಡ್ಡಿ ಬೇಡಿ ಪ್ರತಿಪಾದಿಸುವ ಏಕತೆ

ಪಾಪ ಕಾರ್ಯ ಮಾಡಲು ಹಿಂಜರಿತವಿಲ್ಲ ಎಲ್ಲರೂ ಕೂಪಮಂಡೂಕಗಳು
ಸಂಕಟ ಬಂದಾಗ ವೆಂಟರಮಣ ಇದು ಹಿಂದಿನಿಂದಲೂ ಬಂದ ಕಥೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: