29 April 2018

ಗಜ಼ಲ್ ೩೮ (ಆಸೆ)

*ಗಜ಼ಲ್೩೮*

ಜಗದೆಲ್ಲ ಜೀವಿಗಳಿಗೆ ಅನ್ನದ ಕಣ ದೊರಕಲಿ  ಎಂಬ ಆಸೆ
ಸಕಲ ಜೀವಾತ್ಮರಿಗೆ ಆನಂದದ ಕ್ಷಣ ಲಬಿಸಲಿ ಎಂಬ ಅಸೆ

ದ್ವೇಷದ ಜ್ವಾಲೆಗೆ ಎಲ್ಲೆಡೆ  ನಲುಗುತಿವೆ ಮುಗ್ದ ಜೀವಗಳು
ಪ್ರೀತಿಯೆಲ್ಲೆಡೆ  ಹಬ್ಬಿ ಧರೆ  ಸುಂದರವಾಗಲಿ ಎಂಬ ಆಸೆ

ಉಳ್ಳವರ ಅಟ್ಟಹಾಸ ಎಲ್ಲೆ ಮೀರುತಿದೆ ಕೆಲವೆಡೆಗಳಲ್ಲಿ
ಮೇಲು ಕೀಳಿಲ್ಲದೇ  ಸರ್ವರಿಗೂ ಸಮಪಾಲು ಸಿಗಲಿ ಎಂಬ ಆಸೆ

ಅಜ್ಞಾನದ ಅಂದಕಾರದಲಿ ಕೆಲವರು ಮುಳುಗಿ ತೊಳಲುತಲಿರುವರು
ಜ್ಞಾನದ ಬೆಳಕ ಪಡೆದು ಎಲ್ಲರ ಜೀವನ ಕಂಗೊಳಿಸಲಿ ಎಂಬ ಆಸೆ

ಐಹಿಕ ಸುಖವೇ ಮೇಲೆಂದು ಮೌಡ್ಯದಿ ಕಳಿತಿಹರು ಮೂಢರು
ಸೀಜೀವಿಗೆ ಆತ್ಮಾನಂದ ಪಡೆದ ಮಾನವರು ಕಾಣಿಸಲಿ‌ ಎಂಬ ಆಸೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: