20 April 2018

ಮತದಾನ ಮಾಡೋಣ(ಕವಿ ಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಲೇಖನ)


ಲೇಖನ
ಎಲ್ಲ ವಿಷಯದಲ್ಲೂ
ಮುಂದುವರಿದಿರುವ
ನಾವುಮತದಾನದತ್ತವಿಷಯದಲ್ಲಿ ಮಾತ್ರ
ಹಿಂದುಳಿಯಲು ಕಾರಣವೇನು? ಪರಿಹಾರವೇನು?

ಬಹುತೇಕ ಟೆಕಿಗಳು ಮತ್ತು ನೌಕರರು ಮೇ ೧೨ ರ ಶನಿವಾರದಂದು ವೀಕೆಂಡ್ ಮಜಾ ಮಾಡಲು ಎಲ್ಲಿ ಹೋಗೋಣ ಎಂಬ ಯೋಜನೆ ಮಾಡುತ್ತಿರುತ್ತಾರೆ .ಕಾರಣ ಅವರಿಗೆ  ನಮ್ಮ ಸರ್ಕಾರ ಆಯ್ಕೆ ಮಾಡುವ ಮಹಾನ್ ಜವಾಬ್ದಾರಿ ಕೆಲಸಕ್ಕಿಂತ ಮೋಜು ಮಸ್ತಿ ಮಾಡಲು ಪ್ರಥಮ ಪ್ರಾಶಸ್ತ್ಯ. ಇದರ ಪರಿಣಾಮವಾಗಿ ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮಲ್ಲಿ ಯಾವುದೇ ಚುನಾವಣೆಯಲ್ಲಿ ನೂರು ಪ್ರತಿಶತ ಮತದಾನ ಆಗಿರುವುದು ಅತಿ ವಿರಳ
ಈ ರೀತಿಯಾಗಲು ಕಾರಣಗಳೇನು?

೧ ಮತದಾರರ ಲ್ಲಿ ನಾನೊಬ್ಬ ಮತ ಹಾಕದಿದ್ದರೆ ಪ್ರಪಂಚ ಹಾಳಾಗಲ್ಲ ಎಂಬ ಉಡಾಪೆಯ ನಿರ್ಲಕ್ಷ್ಯ ಮನೋಭಾವ

೨ ಕಲುಷಿತ ರಾಜಕೀಯ ವಾತಾವರಣದಲ್ಲಿ ಎಲ್ಲಾ ಪಕತ ಎಲ್ಲಾ ನಾಯಕರು ಸರಿಯಿಲ್ಲ ಎಂಬ ಪೂರ್ವಾಗ್ರಹ ಪೀಡಿತ ಮನಸುಗಳು
೩ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರ

೪ ಕೆಲ ಬಹುರಾಷ್ಟೀಯ ಕಂಪನಿಯ ನೌಕರರರಿಗೆ ರಜೆ ಕೊಡದೇ ಇರುವುದು

೫  ತಂತ್ರಜ್ಞಾನದ ಅರಿವಿರುವವರಿಗೆ ಆನ್ಲೈನ್ ಮತದಾನಕ್ಕೆ ಅವಕಾಶ ಇಲ್ಲದಿರುವುದು

ಪರಿಹಾರಗಳು

೧  ಪ್ರತಿಯೊಬ್ಬರೂ ಮತದಾನ ನಮ್ಮ ಕರ್ತವ್ಯವೆಂದು ತಿಳಿದು ಮತ ಚಲಾಯಿಸುವ ಮನೋಭಾವ ಬೆಳಿಸಿಕೊಳ್ಳಬೇಕು

೨ ಮತದಾನ ಖಡ್ಡಾಯ ಕಾನೂನು ಜಾರಿಗೆ ತರಬೇಕು ಮತದಾನ ಮಾಡದವರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು

೩ ಅವಕಾಶ ಇರುವವರಿಗೆ ಆನ್ಲೈನ್ ಮತದಾನ ಮಾಡಲು ಅವಕಾಶ ನೀಡಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: