25 October 2017

ಓ ಬಾಲ್ಯವೇ ಮತ್ತೆ ಬರಬಾರದೆ (ಲೇಖನ)

ಲೇಖನ*
*ಓ ಬಾಲ್ಯವೇ ಮತ್ತೆ ಬರಬಾರದೆ ?*

ಈ ಸಂಜೆ ಯಾಕಾಗಿದೆ ನೀನಿಲ್ಲದೆ ....ಎಂಬ ಹಾಡು ಕೇಳಿದ ಕೂಡಲೆ ಮನವು ನನ್ನ ಬಾಲ್ಯ ಕ್ಕೆ ಜಾರಿತು
ನಮ್ಮ ಹಳ್ಳಿಯಲ್ಲಿ ಸಂಜೆಯನ್ನು ಸಂಭ್ರಮಿಸುತ್ತಿದ್ದೆವು .ದನ ಕರುಗಳ ಆಗಮನ .ಕುರಿಮರಿಗಳ ಬ್ಯಾ..ಸದ್ದು, ಹಸು ಎಮ್ಮೆಗಳ ಹಾಲು ಕರೆವುದು.ಮನೆಯಂಗಳ ಗುಡಿಸಿ ಸ್ವಚ್ಛ ಮಾಡುವುದು, ನೀರು ತರುವುದು ಈಗೆ ಸಂಜೆಯ ನಮ್ಮ ಸಂಭ್ರಮ ವರ್ಣಿಸಲಸದಳ .
ಸೂರ್ಯ ನೆತ್ತಿಯಿಂದ ಕೊಂಚ ಓರೆಯಾದರೆ ನಮ್ಮ ಕೆಲಸಗಳ ಕಾರ್ಯ ಆರಂಭ ಬೀದಿಯಲ್ಲಿ ಬಿದ್ದ ದನಕರುಗಳ ಸಗಣಿ ತಂದು ನಮ್ಮ ತಿಪ್ಪೆಗಳಿಗೆ ಹಾಕಲು ಗೆಳೆಯರ ಜೊತೆ ಸ್ವಲ್ಪ ದೂರ ಸಾಗಿ ಬರುವಾಗ ತೀಟೇ ಸೊಪ್ಪು ಪರಸ್ಪರ ತೀಡಿ ಪ್ರತಿಯೊಬ್ಬರೂ ಸರ್ವಾಂಗ ಕೆರೆದುಕೊಂಡು ಬರುವ ಪಾಡು ನೋಡಿ ಊರವರು ಬಿದ್ದು ಬಿದ್ದು ನಗುತ್ತಿದ್ದರು  .
ಮನೆಗೆ ತಲುಪಿ  ಬಂದ್ರೆ ಗಿಡದಿಂದ.ಮತ್ತು ಅಡಿಕೆ ಎಲೆಗಳಿಂದ ಮಾಡಿದ ಪರಕೆಗಳಿಂದ ನಮ್ಮ ಮನೆಯಂಗಳ ಸ್ವಚ್ಛ ಮಾಡಿ  ನೀರು ತರಲು ಒಂದು ಕಿಲೋಮೀಟರ್ ದೂರದ ಗೌಡರ ತೋಟದ ಬಾವಿಗೆ ಹೋಗಿ ಬಾವಿಗಿಳಿದು ಪೈಪೋಟಿ ಮೇಲೆ  ಅಡ್ಡೆಗಳನ್ನು ಬಳಸಿ ನೀರು ತಂದು ನಮ್ಮ ಗುಡಾಣಗಳನ್ನು ತುಂಬಿಸಿ ಅವ್ಯಕ್ತ ಆನಂದ ಅನುಭವಿಸುತ್ತಿದ್ದೆವು .ಈ ವೇಳೆಗಾಗಲೇ ಗುಡ್ಡಕ್ಕೆ ಮೇಯಲು ಹೋದ ದನಕರು. ಕುರಿ ಮೇಕೆ .ಸಾಲುಗಟ್ಟಿ ಊರಕಡೆ ಗೋಧೂಳಿ ಸಮಯದಲ್ಲಿ ದೂಳೆಬ್ಬಿಸಿ ಬರುವ ದೃಶ್ಯ ನಯನಮನೋಹರ .ಕುರಿಕಾಯುವವರು ಅವರ ಕೈಯಲ್ಲಿ ತಲೆ ಕೆಳೆಗಾಗಿಹಿಡಿದ ಆಗ ತಾನೆ ಜನಿಸಿದ ಕುರಿಮರಿ ನೋಡಿ ಖುಷಿ ಪಡುತ್ತಿದ್ದೆವು.
ಈ ವೇಳೆಗಾಗಾಲೇ ಅಮ್ಮ ಹೊಲದಿಂದ ಬಂದು  ದೀಪ ಬೆಳಗಿಸಿ   ಅಡುಗೆ ತಯಾರಿಸಿ ನಮಗೆ ಸಂಜೆ ಆರುವರೆ ಏಳು ಗಂಟೆಗೆ ಊಟ ಬಡಿಸಿದರೆ ನಮಗೆ ಹಾಸಿಗೆ ಹಾಸಿ ಮಲಗುವ ಸಿದ್ದತೆ ಆಗ ಕರೆಂಟ್ ಇಲ್ಲ ಸೀರಿಯಲ್ ಇಲ್ಲ ಬೇಗ ಮಲಗಿ ಬೇಗ ಏಳುವ ತತ್ವ ಪಾಲನೆ .
ಈಗಿನ ಯಾಂತ್ರಿಕ ವಾಕ್, ಜಾಗ್ ಆರೋಗ್ಯ ಕಾಳಜಿಯನ್ನು ಅಂದು ನಮಗರಿವಿಲ್ಲದೆ ಪಾಲಿಸಿದ್ದೆವು ಅದಕ್ಕೆ ಹೇಳುವೆ ಓ ಬಾಲ್ಯವೇ ಮತ್ತೊಮ್ಮೆ ಬರಬಾರದೆ ನಾನು ಕಳೆದ ಸಂಜೆಯ ಕೊಡಬಾರದೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: